• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ಅಂತರಿಯ ಒಂದು ದಿನ | Antariya Ondu Dina

ಅಂತರಿಯ ಒಂದು ದಿನ, ನಿಮಗೆ ಯಾವಾಗಲಾದರೂ ನಿಮ್ಮ ದಿನಚರಿ ಬೇಸರವಾಗಿದೆಯಾ? ಇಲ್ಲೊಬ್ಬಳು ಅಂತರಿ ಎನ್ನುವ ಇರುವೆಗೆ ಕೂಡ ದಿನಚರಿ ಬೇಸರವಾಗಿದೆ. ಆಗ ಅಂತರಿ ಏನು ಸಾಹಸ ಮಾಡಿದಳು ಎಂದು ತಿಳಿದುಕೊಳ್ಳಲು ಕಥೆ ಓದಿ.

₹175   ₹156

ಕೆಂಪಿ (ಮಕ್ಕಳ ಕಥೆಗಳು) | Kempi (Childrens Stories)

ಕೆಂಪಿ , ಪ್ರತಿ ದಿನ ನಗರದಲ್ಲೆಲ್ಲ ತಿರುಗಾಡುವ ಕೆಂಪಿ ಆಕಳು ಇವತ್ತೊಂದು ಹೊಸ ಜಾಗಕ್ಕೆ ಹೋಗುವುದಿದೆ. ಇದರಿಂದಾಗಿ ಕೆಂಪಿ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಂಡಿತೇ? ಅಥವಾ ಕೆಂಪಿಯಿಂದ ಟ್ರಾಫಿಕ್ ಜಾಮ್ ಆಯಿತೇ? ಮತ್ತೆ ಕೆಂಪಿ ಏನು ಮಾಡಿತು ಆವಾಗ?

₹175   ₹156

ಚಿಣ್ಣರ ಚಿತ್ತಾರ | Chinnara Chittara

ಮಕ್ಕಳಿಗೆ ಇಷ್ಟವಾಗುವಂತಹ ಕುತೂಹಲದಾಯಕವಾದ ನೀತಿ ಕಥೆಗಳ ಸಂಗ್ರಹವೇ ಈ ಚಿಣ್ಣರ ಚಿತ್ತಾರ. ಪುಟ್ಟ ಮಕ್ಕಳಿಗೆ ಕಥೆಗಳೆಂದರೆ ಇಷ್ಟ. ಈ ಕೃತಿಯು ಅಂತಹ ಪುಟ್ಟ ಮಕ್ಕಳಿಗೆಂದೇ ರಚಿಸಿರುವ ಪುಟ್ಟ ಪುಟ್ಟ ಕಥೆಗಳ ಸಂಗ್ರಹ. ಈ ಕಥೆಗಳು ಚಿಕ್ಕ ಮಕ್ಕಳಿಗೆ ಖುಷಿಪಡಿಸುವುದರೊಂದಿಗೆ ಅದರಿಂದ ತಿಳಿಯಬೇಕಾದ ನೀತಿಯನ್ನೂ ಸಾರುತ್ತದೆ.

₹90   ₹80

ನನ್ನ ಸೈಕಲ್ಲು | Nanna Saikallu

ಒಂದು ಮಕ್ಕಳ ಕಥೆ ಹೇಳೇಕಾದ್ರೆ ಅದ್ರಲ್ಲಿ ಮಕ್ಕಿಗೆ ಒಂದು ಮಾರಲ್ ಇರ್ಬೇಕಾಗುತ್ತೆ. ಮತ್ತೆ ಮಕ್ಕಿಗೆ encourage ಮಾಡೋಕಾಗಿರೋ ಗುಣಗಳು ಅದ್ರಲ್ಲಿ ಇರ್ಬೇಕಾಗುತ್ತೆ. ಅದ್ರು ಜೊತೆಗೆ ಒಂದಷ್ಟು ಮಾಹಿತಿನೂ ಕೊಡೋಕಾಗುತ್ತೆ. ಈ ಪುಸ್ತಕದಲ್ಲಿ ನಾನು ಓದಿದ ಕಥೆ ಒಬ್ಬ ಹುಡುಗ ಸೈಕಲ್ ತಗೋಬೇಕು ಅಂಥ ಅವ್ರ ಬದುಕನ್ನ ಕಟ್ಟಿಕೊಳ್ಳಲು ಹೊಡೆದಾಡುವ ಸಂದರ್ಭದಲ್ಲಿ, ಒಬ್ಬ ಪ್ರಿನ್ಸಿಪಾಲ್ ಹೇಗೆ ಅವನಿಗೆ ಅರಿವಿಲ್ಲದಂತೆ ಒಂದ್ ಎಕ್ಸಾಮ್ ಬರ್ಸಿ, ಆ ಎಕ್ಸಾಮ್ ಇಂದ ಅನ್ನು ಜೀವನದಲ್ಲಿ ಹೇಗೆ ಮುಂದೆ ಹೋಗ್ತಾನೆ ಅನ್ನೋ ವಿಷಯ ತುಂಬಾ ಅರ್ಥಪೂರ್ಣವಾಗಿದೆ. ಇನ್ನರ್ಮೇಷನ್ ಇಲ್ವ, ಅದು ಮಕ್ಕಿಗೆ ಮಾತ್ರ ಅಲ್ಲ ಎಲ್ಲೂ ಓದಿದಾಗ ಈ ತರಹದ ಪರೀಕ್ಷೆ ಒಂದು ಇದೆ. ನಾವು ತುಂಬಾ ಜನಕ್ಕೆ ಇದನ್ನ ತಲುಪಿಸಬೇಕು ಮತ್ತು ಅದರ ಜವಾಬ್ದಾರಿ ಕೂಡ ನಮ್ಮದೇ ಎನ್ನುವುದು ತಿಳಿಯುತ್ತದೆ. ಇಷ್ಟೆಲ್ಲವನ್ನು ಹೊಂದಿಸಿ ಬರೆದಿರುವ ಈ ಕಥೆ ನನಗೆ ಬಹಳ ಇಷ್ಟವಾಗಿದೆ, ಆಮೇಲೆ ಪೂರ್ಣಿಮಾ ಹೆಗ್ಗಡೆಯವರು ಒಬ್ಬರು ಪ್ರಿನ್ಸಿಪಾಲ್ ಆಗಿ ಮಕ್ಕಳನ್ನ ಹತ್ತಿರದಿಂದ ನೋಡಿ ಮಕ್ಕಿಗೆ ಏನೇನೂ ಅವಶ್ಯಕತೆಗಳಿವೆ, ಆ ಮಕ್ಕು ಹೇಗೆ ಬೆಳೀಬೇಕು, ಆ ಮಕ್ಕಿಗೆ ನಾವು ಟೀಚರ್ ಗಳಾಗಿ ಏನೇನನ್ನ ತಲುಪಿಸಬೇಕು ಅನ್ನೋ ಬದ್ಧತೇನ ತಮ್ಮ ಕಥೆಗಳು ಮತ್ತು ಜೀವನ ಎರಡರಲ್ಲೂ ಅಳವಡಿಸಿಕೊಂಡಿರೋದು ಬಹಳ ಖುಷಿ ಕೊಡುತ್ತೆ. ಪೂರ್ಣ ಚಂದ್ರ ಚಲನಚಿತ್ರ ನಟರು

₹80   ₹71

ನೀಲಿ ಕೊಡೆ | Neeli kode

ಕನ್ನಡದಲ್ಲಿ ಮಕ್ಕಳ ಕಾವ್ಯ ಬೆಲ್ಲದಚ್ಚಿನಂತೆ ಒಂದು ಚೌಕಟ್ಟಿಗೆ ಒಳಪಟ್ಟಿತ್ತು. ಯಾವ ಆಲೆಮನೆಯಲ್ಲಿ ತಯ್ಯಾರಾದರೂ, ಕಂಡರೂ ಒಂದೇ ತರಹ; ತಿಂದರೂ ಒಂದೇ ರುಚಿ. ಆಗ ಮಕ್ಕಳೂ ಅದನ್ನೇ ಇಷ್ಟಪಟ್ಟು ತಿನ್ನುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ; ಮಕ್ಕಳೂ ಬದಲಾಗಿದ್ದಾರೆ ಈಗಿನ ಕಾಲದ ಮಕ್ಕಳ ಪರಿಸರ, ದೃಷ್ಟಿ, ಆಶಯ, ಚಿಂತನೆ ಎಲ್ಲವೂ ನಮಗೆ ನಿಲುಕದ್ದು. ಇಂಥ ಕಾಲಘಟ್ಟದಲ್ಲಿ ಸಹೃದಯ ಮಿತ್ರರಾದ ಸುರೇಶ ಕಂಬಳಿಯವರು ಮಕ್ಕಳ ಕೈಗೆ 'ನೀಲಿಕೊಡೆ' ಎಂಬ ಕವನ ಸಂಕಲನ ನೀಡಿ ಸಂತುಷ್ಟಗೊಳಿಸಲು ಹೊರಟಿದ್ದಾರೆ. ಏನೋ ಹೊಸತನ್ನು ಕೊಡಬೇಕೆಂಬ ಮನಸ್ಸು ಮಾಡಿದ್ದಾರೆ. ಅವರ ಪ್ರಯತ್ನ ಯಶದ ಹಾದಿಯಲ್ಲಿದೆ. ಆರಂಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ. ಈಗ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿರುವ ಕಂಬಳಿಯವರಿಗೆ ಸದಾ ಮಕ್ಕಳ ಒಡನಾಟದ ಸೌಭಾಗ್ಯವಿದೆ. ಈಗಾಗಲೇ ಎರಡು ಮಕ್ಕಳ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಈ ಹೊಸ ಸಂಕಲನದಲ್ಲಿ ಅವರ ಕಾವ್ಯದ ವಸ್ತುಗಳು ಹಳೆಯದಾಗಿ ತೋರಿದರೂ ವಿಶಿಷ್ಟ ಶೈಲಿಯಿಂದ ಗಮನ ಸೆಳೆಯುತ್ತವೆ. ಚಂದ ಚಂದ ಮಾತನಾಡುವ 'ಮುದ್ದು ತಂಗಿ', ಮಕ್ಕಳಾಟಿಕೆ ಅಡ್ಡಿಪಡಿಸಿಯೂ ಖುಷಿ ಕೊಡುವ 'ಮಳೆ'ಯಂತಹ ಸೆಳೆಯುವ ಕವಿತೆಗಳೂ ಇಲ್ಲಿವೆ. ನಾಟಕ, ಚಿತ್ರಗೀತೆ, ಕಿರುಚಿತ್ರ ನಿರ್ದೇಶನ, ಮಕ್ಕಳ ಸಾಹಿತ್ಯ ಎಲ್ಲ ಕಡೆ ಕೈ ಹಾಕುತ್ತ ಮುಂದೆ ಸಾಗುತ್ತಿರುವ ಸುರೇಶ ಕಂಬಳಿಯವರು ಮಕ್ಕಳ ಸಾಹಿತ್ಯದತ್ತ ಹೆಚ್ಚು ಒಲವು ತೋರಲಿ. ಹಳೆಯ ಸರಕುಗಳ ಸುತ್ತವೇ ಗಿರಕಿ ಹೊಡೆಯುತ್ತ ಸೊರಗುತ್ತಿರುವ ಮಕ್ಕಳ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿ ಮಕ್ಕಳ ಕಣ್ಮಣಿ ಆಗಲಿ ಎಂದು ಆಶಿಸುವೆ.

₹100   ₹89

ಭೈರ | Bhaira

ಆನೆ ಬಂತೊಂದಾನೆ. ಯಾವೂರಾನೆ? ಇಲ್ಲಿಗ್ಯಾಕೆ ಬಂತು? ತಾಯಿ ಹುಡುಕಿಕೊಂಡು ಬಂತು. ತಾಯಿ ಸಿಗದೆ ಬೇಜಾರಾಗಿ, ಬಾಲ ಅಲ್ಲಾಡಿಸ್ಕೊಂಡು ಆಯ್ತು ಎನ್ನುವ ಶಿಶುಗೀತೆಯ ಎನ್ನುವ ಶಿಶುಗೀತೆಯನ್ನು ಗುಣುಗುಡುತ್ತಾ "ಭೈರ" ಎಂಬ ಈ ಮಕ್ಕಳ ಕಾದಂಬರಿ "ಭೈರಾಪುರ"ದ ಆನೆಯ ಹಿಂಡಿನ ಸುತ್ತಮುತ್ತ ಹೆಣೆದಿರುವ ಕಥಾನಕವಿದು. ನಮ್ಮ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಭೈರಾಪುರ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವಾಗಲೂ ಆನೆಗಳ ಹಿಂಡಿನ ಹಾವಳಿಯ ಕಥೆಯನ್ನು ಆಧಾರವಾಗಿಟ್ಟುಕೊಂಡು ಕಂಚುಗಾರನಹಳ್ಳಿ ಸತೀಶ್ ಪರಿಸರ ಕಾಳಜಿಯುಳ್ಳ ಕಾದಂಬರಿಯನ್ನು ಹೊರತಂದಿದ್ದಾರೆ.

₹100   ₹89

ಮ್ಯಾಜಿಕ್ ಮಕ್ಕಳು | Magic Makkalu

ಮಲ್ಲಿಗೆಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಕುವೆಂಪು, ಬೇಂದ್ರೆ,ಕಾರಂತಜ್ಜರ ಬಣ್ಣಬಣ್ಣದ ಚಿತ್ರಗಳಿಂದ ಕೂಡಿದ್ದ ಶಾಲೆಯ ಗೋಡೆ, ಊರಿನ ಪರಿಸರ ಇವೆಲ್ಲಾ ಪುಸ್ತಕದ ಪುಟ ತಿರುಗಿಸುತಿದ್ದಂತೆ ಎಂಥವರನ್ನು ಕೂಡ ತಮ್ಮ ಬಾಲ್ಯಕ್ಕೆ ಮರಳಿ ಕರೆದೊಯ್ಯೋದರಲ್ಲಿ ಡೌಟೇ ಇಲ್ಲ.. ಅಷ್ಟು ಚೆಂದವಾಗಿ ಕಥೆಗೆ ಪೂರಕವಾಗಿ ಆಕರ್ಷ್ ಎಂ.ಆರ್ ಅವರು ಚಿತ್ರಗಳ ಬಿಡಿಸಿದ್ದಾರೆ. ತರಲೇ ಕಿತಾಪತಿ ತುಂಟಾಟಗಳಿಗೆ ಎತ್ತಿದ ಕೈ, ಓದುವುದರಲ್ಲೂ ಕೂಡ ಅಷ್ಟೇ ಫೇಮ್ಮಸ್ಸಾದ ಆರನೇ ತರಗತಿಯ ಐವರು ಮಕ್ಕಳು ಸೇರಿ ಒಂದು ತಂಡ ಕಟ್ಟಿಕೊಂಡು ಶಾಲೆಯ ಪ್ರತಿಭಾ ಕಾರಂಜಿಯಲ್ಲಿ ಸೋಲಾರ್ ಪ್ಯಾನೆಲ್ ತಯಾರಿಸಿ, ಗೆದ್ದು ಇಡೀ ಊರಿಗೆ ಮಾದರಿಯಾದ ಮಕ್ಕಳ ಸಾಹಸಮಯ ಎಳೆ ಹೊಂದಿರುವ ಕಾದಂಬರಿ ಮೂರರಿಂದ ಹನ್ನೆರಡನೇ ವಯಸ್ಸಿನ ಮಕ್ಕಳವರೆಗೂ ಒಂದೊಳ್ಳೆ ಕಥೆಯ ಜೊತೆಗೆ ಸೋಲಾರ್ ಪ್ಯಾನಲ್ ಹೇಗೆ ತಯಾರಿಸುತ್ತಾರೆ, ಅದರ ಕಾರ್ಯವೈಖರಿ ಹೇಗೆ? ಪ್ಯಾನಲ್ನ ಮುಖ್ಯ ಕೆಲಸವೇನು? ಈರುಳ್ಳಿ ಕತ್ತರಿಸಿದಾಗ ಕಣ್ಣಲ್ಲೇಕೆ ನೀರು ಬರುತ್ತೆ ಹೀಗೆ ವಿಜ್ಞಾನದ ಪಾಠವನ್ನು ತಿಳಿಸುತ್ತದೆ.

₹165   ₹147