• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಅಮೋಘವರ್ಷ | Amoghavarsha

“ಅಮೋಘವರ್ಷ” ಇದೊಂದು ಸಂಶೋಧನಾತ್ಮಕ ಐತಿಹಾಸಿಕ ಕಾದಂಬರಿ. ಒಂಭತ್ತನೆಯ ಶತಮಾನದಲ್ಲಿ ಮಾನ್ಯಖೇಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ರಾಷ್ಟ್ರಕೂಟ ದೊರೆ ಅಮೋಘವರ್ಷ ಬಿರುದಾಂಕಿತ ನೃಪತುಂಗ, ಮಗಧದ ಸಾಮ್ರಾಟ ಅಶೋಕನಂತೆ ಶಾಂತಿ ಮಾರ್ಗದಲ್ಲಿಯೇ ವಿಸ್ತಾರವಾದ ರಾಜ್ಯವನ್ನು ಆಳಿದವನು. ಅಶೋಕ ಬೌದ್ಧಧರ್ಮವನ್ನು ಅವಲಂಬಿಸಿದರೆ ನೃಪತುಂಗ ಜೈನಧರ್ಮವನ್ನು ಅವಲಂಬಿಸಿದವನು. ಅಮೋಘವರ್ಷ” ಕಾದಂಬರಿ ರಾಷ್ಟ್ರಕೂಟರ ಕುರಿತು ಪೂರ್ಣ ಪ್ರಮಾಣದಲ್ಲಿ ಅರಿತುಕೊಳ್ಳುವುದಕ್ಕೆ ಸಹಾಯಕಾರಿಯಾಗಲಿದೆ. ಲೇಖಕರಾದ ಲಕ್ಷ್ಮಣ ಕೌಂಟೆ ಅವರು ಹಲವು ಗ್ರಂಥಗಳನ್ನು ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಿದ್ದು ರಾಷ್ಟ್ರಕೂಟರ ಕುರಿತು ಇದುವರೆಗೂ ಪ್ರಕಟವಾದ ಎಲ್ಲ ಕಾದಂಬರಿಗಳಿಗಿಂತಲೂ ಭಿನ್ನವೂ ವಿಶಿಷ್ಠವೂ ಆಗಿದೆ.

₹420   ₹357

ಅಮೋಘವರ್ಷ ಇಬುಕ್ | Amoghavarsha Ebook

“ಅಮೋಘವರ್ಷ” ಇದೊಂದು ಸಂಶೋಧನಾತ್ಮಕ ಐತಿಹಾಸಿಕ ಕಾದಂಬರಿ. ಒಂಭತ್ತನೆಯ ಶತಮಾನದಲ್ಲಿ ಮಾನ್ಯಖೇಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ರಾಷ್ಟ್ರಕೂಟ ದೊರೆ ಅಮೋಘವರ್ಷ ಬಿರುದಾಂಕಿತ ನೃಪತುಂಗ, ಮಗಧದ ಸಾಮ್ರಾಟ ಅಶೋಕನಂತೆ ಶಾಂತಿ ಮಾರ್ಗದಲ್ಲಿಯೇ ವಿಸ್ತಾರವಾದ ರಾಜ್ಯವನ್ನು ಆಳಿದವನು. ಅಶೋಕ ಬೌದ್ಧಧರ್ಮವನ್ನು ಅವಲಂಬಿಸಿದರೆ ನೃಪತುಂಗ ಜೈನಧರ್ಮವನ್ನು ಅವಲಂಬಿಸಿದವನು.

₹420   ₹210

ಆರನೇ ವಿಕ್ರಮಾದಿತ್ಯ | Aarane Vikramaaditya

ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯ (1076 – 1126 C.E)

₹350   ₹312

ಋಷ್ಯಶೃಂಗ | Rushyashrunga

ಲೇಖಕ ಲಕ್ಷ್ಮಣ ಕೌಂಟೆ ಅವರ ಪೌರಾಣಿಕ ಕಾದಂಬರಿ ಕೃತಿ ʻಋಷ್ಯಶೃಂಗ: ಯುವ ಮಳೆಮುನಿಯೋರ್ವನ ರಾಮಾಯಣ ಪೂರ್ವದ ಕಥೆ ಆಧಾರಿತ ಕಾದಂಬರಿʼ. ಮಹಾಭಾರತದಲ್ಲಿ ಒಂದು ಸಣ್ಣ ಉಪಕಥೆ ಆಗಿ ಬರುವ ಖಷ್ಯಶೃಂಗ ಮುನಿಯ ಕಥೆಯನ್ನು ಕುತೂಹಲಕಾರಿ ಆಗಿ ಹೇಳಿದ್ದಾರೆ. ಇವರು ಕಶ್ಯಪನ ಮೊಮ್ಮಗ ಋಷಿ ವಿಭಾಂಢಕನ ಮಗ. ತನ್ನ ಪತ್ನಿ ತನ್ನನ್ನು ತೊರೆದು ಹೋದಳೆಂಬ ಸಿಟ್ಟಿನಲ್ಲಿ ವಿಭಾಂಢಕ ಮಾನವ ದ್ವೇಷಿ ಆಗಿ ತನ್ನ ಮಗನನ್ನು ಕೌಶಿಕಿ ನದಿ ತೀರದ ಗೊಂಡಾರಣ್ಯ ಒಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಎಲ್ಲಾ ಮಂತ್ರ ತಂತ್ರ ಕಲಿಸಿ ಬೆಳೆಸುತ್ತಾನೆ. ತಂದೆಗೆ ವಿಧೇಯನಾಗಿ ಬೆಳೆದ ಋಷ್ಯಶೃಂಗ ಕಠಿಣ ಸಾಧನೆ ಮೂಲಕ ಮಳೆ ದೇವರನ್ನು ಒಲಿಸಿಕೊಳ್ಳುತ್ತಾನೆ. ಹೀಗೆ ತಾನು ಕಾಲು ಇಟ್ಟ ಕಡೆ ಮಳೆ ತರಿಸಲು ಸಾಧ್ಯ ಇರುವ ಅದ್ಬುತ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತಾನೆ. ಆದರೆ ಯೌವನದಲ್ಲಿ ತುಂಬಾ ಸ್ವೇಚ್ಛೆಯಿಂದ ವರ್ತಿಸಿದ ಕಾರಣ ಪುರುಷತ್ವ ಕಳೆದುಕೊಡಿರುತ್ತಾನೆ. ಈ ಕಾದಂಬರಿಯಲ್ಲಿ ರಾಜರ ಸ್ವಾರ್ಥ ಲಂಪಟತನವನ್ನೂ ಅನಾವರಣಗೊಳಿಸಿದ್ದಾರೆ. ಮಳೆ ನೀರಿನ ಸದುಪಯೋಗ, ಗುಡಿ ಗುಡಾರ ಮೇಲೆ ಖರ್ಚು ಮಾಡುವ ಹಣವನ್ನು ಪ್ರಜೆಗಳ ಹಿತಕ್ಕೆ ಖರ್ಚು ಮಾಡಬೇಕು ಎನ್ನುವ ನೀತಿಯನ್ನೂ ಹೇಳಿದ್ದಾರೆ.

₹325   ₹289

ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ | Chalukya Chakravarthy Immadi Pulikeshi

ಉತ್ತರಾಪಥೇಶ್ವರ ಎಂಬ ಬಿರುದಾಂಕಿತ, ಕಾನ್ಯಕುಬ್ಬದ ಸಾಮ್ರಾಟ, ಅಪಾರ ಸೈನ್ಯವನ್ನು ಹೊಂದಿದ ಹರ್ಷವರ್ಧನನಂತಹ ಮಹಾಪ್ರತಾಪಿಯನ್ನು ರಣತಂತ್ರದ ಮೂಲಕವೇ ಬಾದಾಮಿ ಚಾಲುಕ್ಯ ಪುಲಿಕೇಶಿ ಸೋಲಿಸಿದ್ದಲ್ಲದೇ, ಸೌಜನ್ಯ ಮತ್ತು ಸ್ನೇಹ ವಿಶ್ವಾಸಗಳಿಂದ ಅವನ ಹೃದಯವನ್ನು ಗೆದ್ದು ಅವನಿಂದಲೇ ಪರಮೇಶ್ವರ ಪುಲಿಕೇಶಿ ಎಂದು ಹೊಗಳಿಸಿಕೊಂಡ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಕುರಿತ ಐತಿಹಾಸಿಕ ಕಾದಂಬರಿ.

₹450   ₹382

ಮಹಾವಿನಾಶ | Mahavinasha

ಬುದ್ಧನ ಕಾಲಾನಂತರದ ಕಥೆಯುಳ್ಳ, ಹೆಚ್ಚು ಬಳಸಲ್ಪಡದ ಕಥಾವಸ್ತುವನ್ನು ಹೆಣೆದುಕೊಂಡು ಅಧ್ಯಯನದ ಮುಖಾಂತರವೇ ರಚಿಸಲ್ಪಟ್ಟ ಐತಿಹಾಸಿಕ ಕಾದಂಬರಿ ‘ಮಹಾವಿನಾಶ’. ಗೌತಮಬುದ್ಧನ ಪರಿನಿರ್ವಾಣದ ನಂತರದ ಕಾಲದಿಂದ ಮುಂದಿನ ಐದಾರು ನೂರು ವರ್ಷದ ಕಥಾ ಹಂದರವನ್ನು ಹೊಂದಿದೆ.

₹450   ₹383

ಮಹಾವಿನಾಶ ಇಬುಕ್ | Mahavinasha Ebook

ಬುದ್ಧನ ಕಾಲಾನಂತರದ ಕಥೆಯುಳ್ಳ, ಹೆಚ್ಚು ಬಳಸಲ್ಪಡದ ಕಥಾವಸ್ತುವನ್ನು ಹೆಣೆದುಕೊಂಡು ಅಧ್ಯಯನದ ಮುಖಾಂತರವೇ ರಚಿಸಲ್ಪಟ್ಟ ಐತಿಹಾಸಿಕ ಕಾದಂಬರಿ ‘ಮಹಾವಿನಾಶ’. ಗೌತಮಬುದ್ಧನ ಪರಿನಿರ್ವಾಣದ ನಂತರದ ಕಾಲದಿಂದ ಮುಂದಿನ ಐದಾರು ನೂರು ವರ್ಷದ ಕಥಾ ಹಂದರವನ್ನು ಹೊಂದಿದೆ

₹450   ₹225

ವೀರ ಬಲ್ಲಾಳ | Veera Ballaala

ಹೊಯ್ಸಳ ದೊರೆಗಳಲ್ಲಿ ರಾಜ್ಯವನ್ನು ವಿಸ್ತರಿಸಿ ಸಾಮ್ರಾಜ್ಯವನ್ನಾಗಿ ಮಾರ್ಪಡಿಸುವ ಮನಸ್ಸು ವಿಷ್ಣುವರ್ಧನನಿಗಿತ್ತು. ಅದಕ್ಕಾಗಿ ಅವನು ನಿರಂತರ ಪ್ರಯತ್ನವನ್ನೂ ಮಾಡಿದ್ದ ಆದರೆ ಕಲ್ಯಾಣದ ಚಾಲುಕ್ಯ ಚಕ್ರವರ್ತಿ ಆರನಯ ವಿಕ್ರಮಾದಿತ್ಯ ಅವನ ಮಹದಾನೆಯ ಮೇಲೆ ತಣ್ಣೀರೆರಚಿದ. ಅವನು ಕೊನೆಯವರೆಗೂ ಕಲ್ಯಾಣ ಚಾಲುಕ್ಯರ ಸಾಮಂತನಾಗಿ ಉಳಿಯಬೇಕಾಯಿತು. ವಿಷ್ಣುವರ್ಧನನ ಮರಣದ ನಂತರ ಹೊಯ್ಸಳ ಸಿಂಹಾಸನವನ್ನೇರಿದ ಇಮ್ಮಡಿ ನರಸಿಂಹ ತಂದೆಗೆ ತಕ್ಕ ಮಗನಾಗಿರಲಿಲ್ಲ. ಅವನು ಸಿಂಹಾಸನ ದೊರಕಿಸಿದ ಅಧಿಕಾರವನ್ನು ತನ್ನ ಸುಖ ಲೋಲುಪತೆಗಾಗಿ ಕಳೆದ.

₹450   ₹389