• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಜಮಲಾಪುರದ ಜಡೆಮುನಿ ಕೇಸು | Jamalapurada Jademuni Kesu

"ಆ ಜಡೆಮುನಿ ಇದ್ಯಲ್ಲ, ಅದು ರಾತ್ರಿಹೊತ್ತು ಮಾತ್ರ ಓಡಾಡೋ ಪಿಶಾಚಿ. ಮಧ್ಯರಾತ್ರಿ ಕಾಡುದಾರಿಯಲ್ಲಿ ಜಡೆಮುನಿಯು ಮುಂದೆ ನಡೆದು ಹೋಗ್ತಿದ್ರೆ ಅದರ ಹಿಂದೆ ಕೊಳ್ಳಿದೆವ್ವಗಳು ಆ ಜಡೆಮುನಿಯ ಕಿಲೋಮೀಟರಿನಷ್ಟು ಉದ್ದದ ಜಡೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗ್ತಿದ್ವು ಅಂತ ನಮ್ಮ ಅಜ್ಜಂದಿರು ಹೇಳ್ತಿದ್ರು. ಹಾಗೇ ನಾವು ಆ ಜಡೆಮುನಿದೇನಾದ್ರೂ ಒಂದು ಕೂದಲು ಕಿತ್ಕೋಂಡ್ರು ಸಾಕು, ಕೇಳಿದ್ದನ್ನೇಲ್ಲಾ ಅದು ಕೊಡುತ್ತಂತೆ. ಅಕಸ್ಮಾತ್ ಹೀಗೆ ಕೂದ್ಲು ಕೀಳೇಕಾದ್ರೇ ಏನಾದ್ರೂ ಅದರ ಕಣ್ಣಿಗೆ ಬಿದ್ವಿ ಅನ್ಕೋ, ಮುಗಿತು ಅವರ ಕತೆ. ಅವರುಗಳು ಅಲ್ಲೇ ರಕ್ತ ಕಾರ್ಕೊಂಡು ಸಾಯ್ತಿದ್ರಂತೆ. ಹೀಗೆ ಸತ್ತವರ ಹಸಿ ಮಾಂಸವೇ ಅದರ ಶಿಷ್ಯಂದಿರಾದ ಕೊಳ್ಳದೆವ್ವಗಳಿಗೆ ಊಟವಂತೆ! ಹೀಗೆ ಪ್ರತಿರಾತ್ರಿ ಊರನ್ನ ಸುತ್ತುಹಾಕಿ ನಂತರ ಅಲ್ಲಿನ ಕೆರೆಯಲ್ಲಿ ಸ್ನಾನ ಮಾಡಿ ಹೋಗುವ ಜಡೆಮುನಿಯನ್ನ ನಾವು ನೋಡ್ಬೋದು ಆದ್ರೆ ಅದು ನೋಡುವ ಹಾಗಿಲ್ಲ. ಹಾಗೆ ಅದರ ಕಣ್ಣಿಗೆ ಸಿಕ್ಕಿ ಸತ್ತವರಿಗೆ ಲೆಕ್ಕಾನೇ ಇಲ್ಲಂತೆ. ರಾತ್ರಿ ಹೊತ್ತು ಏನೋ ಭಯಂಕರ ಸದ್ದಾಗಿ, ಬೆಳಗೆದ್ದು ನೋಡಿದಾಗ ಮನೆಯೆದುರು ಒಣಗಿ ಹಾಕಿದ್ದ ಕಾಫಿ ಬೀಜಗಳ ರಾಶಿಯ ಮೇಲೆ ಅದರ ಜಡೆಯಿಂದಾದ ಗುರುತುಗಳಿರುತ್ತಿತ್ತು ಅಂತ ಊರೋರು ಹೇಳ್ತಿದ್ರು. ಹಾಗೇ ರಾತ್ರಿ ಹೊತ್ತು ಶಿಕಾರಿಗೆಂದು ಹೋದವರಿಗೆ ಆ ಜಡೆಮುನಿ ದೈಯ್ಯವು ಮೈಗತ್ತಿ ನಂತರ ಅವರುಗಳು ಸುಮಾರು ದಿನಗಳ ಕಾಲ ಊಟ - ನಿದ್ರೆ ಇಲ್ದೆ ಬದುಕಿ ನಂತರ ಅದು ಮೈಯಿಂದ ಬಿಟ್ಟೋದ್ಮೇಲೆ ರಕ್ತ ಕಾರ್ಕೊಂಡು ಸತ್ತೋಗ್ತಿದ್ರಂತೆ!!" ಎಂದು ಶೇಷಜ್ಜನು ತಾನು ಚಿಕ್ಕಂದಿನಲ್ಲಿ ಕೇಳಿದ್ದ ಕತೆಯನ್ನು ರೋಚಕವಾಗಿ ಹೇಳಿ ಮುಗಿಸುತ್ತಲೇ ಇತ್ತ ತದೇಕಚಿತ್ತದಿಂದ ಕತೆಯನ್ನು ಆಲಿಸುತ್ತಿದ್ದ ಗೌಡರ ಮಗಳಾದ ನಯನಳ ತಲೆತುಂಬಾ ಜಡೆಮುನಿಯೇ ತುಂಬಿತ್ತು. ಜೊತೆಗೆ ಇತ್ತ 'ಜಡೆಮುನಿ'' ಕಾಟದಿಂದ ಬೇಸತ್ತಿದ್ದ ಜಮಲಾಪುರದ ಜನರ ತಲೆಯಲ್ಲೂ ಕೂಡ!

₹275   ₹245

ದಿ ಕ್ಯೂರಿಯಸ್ ಕೇಸ್ ಆಫ್‌ ತಾರಾಗುಪ್ತ | The Curious Case Of Taragupta

ಡಿಯರ್ ಡಿಟೆಕ್ಟಿವ್ ಹಿಮವಂತ್, ನಾನು ಈ ಡೆತ್ ನೋಟನ್ನು ನಿನಗೆ ಕಳಿಸುತ್ತಿರುವ ಹಿಂದೆ ಒಂದು ಪ್ರಮುಖ ಕಾರಣವಿದೆ. ಇತ್ತೀಚಿನ ದಿನಗಳಲ್ಲಿ ನನ್ನ ಬದುಕು ದುಸ್ತರವಾದಂತೆ ನನಗನಿಸುತ್ತಿದೆ. ಜೊತೆಗೆ ನನ್ನ ವೈಯಕ್ತಿಕ ಜೀವನವು ತೀರ ಹದಗೆಟ್ಟು ಹೋಗಿರುವುದರಿಂದ ನನಗೆ ಬದುಕುವ ಆಸಕ್ತಿಯು ಹೊರಟುಹೋಗಿದೆ. ಒಂದಿಷ್ಟು ತಿಂಗಳಿನಿಂದ ಸೀವಿಯರ್ ಡಿಪ್ರೆಶನ್ ನಿಂದ ಬಳಲುತ್ತಿದ್ದೇನೆ. ಹಾಗೇಯೇ ಮೂರ್ನಾಲ್ಕು ತಿಂಗಳಿಂದ ಒಂದಕ್ಷರವನ್ನು ಬರೆಯಲಾಗುತ್ತಿಲ್ಲ ಎಂಬ ಕೊರಗು ನನ್ನನ್ನು ಸದಾ ಕಾಡುತ್ತಿದೆ. “ಫಿಲ್ಲರ್ ಕಾದಂಬರಿಗಾರ್ತಿ ಯಾಗಿ ಸಿಕ್ಕ ಖ್ಯಾತಿಯೆಲ್ಲವೂ ಶೂನ್ಯವೆಂದು ನನಗೀಗ ಅರಿವಾಗುತ್ತಿದೆ. ಒಂದು ವೇಳೆ ನಾನು ಸತ್ತು ಹೋದರೆ, ಅದಕ್ಕೆ ನನ್ನ ಗಂಡ ಮತ್ತು ಅವನೊಟ್ಟಿಗೆ ಅಕ್ರಮ ಸಂಬಂಧವನ್ನು ಹೊಂದಿರುವ “ಚರ್ಚ್ ಸ್ಪೀಟ್ ನ ಹುಡುಗಿಯು ಕಾರಣವಾಗಿರುತ್ತಾರೆ. ಇದಲ್ಲದೆ ಸಾಯುವ ಮುನ್ನ ಸಾಕಷ್ಟು ರಹಸ್ಯಗಳನ್ನು ನಿನ್ನೊಂದಿಗೆ ತೆರದಿಡಬೇಕಿದೆ. ಆದ್ದರಿಂದ ಮಧ್ಯರಾತ್ರಿ ಒಂದರ ವೇಳೆಗೆ ನೀನು ನನ್ನನ್ನು ಭೇಟಿಯಾಗಬೇಕು. ಭೇಟಿಯು ರಹಸ್ಯವಾಗಿರುವುದರಿಂದ ಸ್ಥಳವನ್ನು ಕೂಡ ರಹಸ್ಯವಾಗಿರಿಸಿದ್ದೇನೆ. ನೆನಪಿರಲಿ, ಇದೊಂದು ಸೀಕ್ರೆಟ್ ಡೆತ್ ನೋಟ್ !! ನೋವಿನಿಂದ ತಾರಾಗುಪ್ತ…

₹225   ₹200