
ಭಾರತ ಸ್ವಾತಂತ್ರ್ಯ ಹೋರಾಟವು ಕೇವಲ ರಾಜಕೀಯ ಹೋರಾಟವಾಗಿರಲಿಲ್ಲ. ಅದು ರಕ್ತಸಿಕ್ತ ಅಧ್ಯಾಯವೂ ಆಗಿತ್ತು. ತ್ಯಾಗ ಬಲಿದಾನಗಳ ಚಳವಳಿಯೂ ಆಗಿತ್ತು. ಅದು ಪುರುಷ, ಮಹಿಳೆ ಎಂಬ ತಾರತಮ್ಯಗಳಿಲ್ಲದ ಒಂದು ಸಮಗ್ರ ಹೋರಾಟವಾಗಿತ್ತು. ಆದರೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರಿಗೆ ಹೋಲಿಸದರೆ, ಮಹಿಳೆಯರು ವಹಿಸಿದ ಪಾತ್ರವು ಇತಿಹಾಸದ ಪುಟಗಳಲ್ಲಿ ಮಬ್ಬು ಮಬ್ಬಾಗಿ ದಾಖಲಾಗಿದೆ. ಆ ಹಿನ್ನಲೆಯಲ್ಲಿ ನೋಡಿದಾಗ ಬೆಳವಡಿ ಮಲ್ಲಮ್ಮ ಕೃತಿಯ ಮಹತ್ವ ನಮಗೆ ಅರಿವಾಗುತ್ತದೆ. ಬೆಳವಡಿ ಮಲ್ಲಮ್ಮ ಯುದ್ಧವ್ಯೂಹಗಳಿಗೆ, ಗಾಳಿವೇಗದ ಪ್ರಹಾರಗಳಿಗೆ, ಸ್ವಾಭಿಮಾನ, ಧೈರ್ಯ ಸಾಹಸಗಳಿಗೆ ಹೆಸರಾದವರು.
Category: | ವೀರಲೋಕ ಪುಸ್ತಕಗಳು |
Sub Category: | ಕಾದಂಬರಿ |
Author: | ಕೌಂಡಿನ್ಯ| Kauṇḍinya |
Publisher: | ವೀರಲೋಕ | Veeraloka |
Language: | Kannada |
Number of pages : | |
Publication Year: | |
Weight | |
ISBN | 9788197200684 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಭಾರತ ಮಾತ್ರವಲ್ಲ, ಇಡೀ ವಿಶ್ವದಲ್ಲೇ ಯಾರೂ ಮಾಡಿರದ, ವಿಶೇಷವಾದ ಸಾಧನೆಯನ್ನು, ಹಠ ಮತ್ತು ನಿರಂತರ ಪ್ರಯತ್ನ, ಪರಿಶ್ರಮದಿಂದ ಸಾಧಿಸಿ, ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡಿದವಳು, ಈ ನಾಡಿನ ಹೆಮ್ಮೆಯ ವೀರವನಿತೆ ಬೆಳವಡಿ ಮಲ್ಲಮ್ಮ. ಆ ಕಾಲದಲ್ಲಿ ಮೂರು ಸಾವಿರ ಮಹಿಳೆಯರಿಗೆ ಯುದ್ಧದ ತರಬೇತಿ ನೀಡಿ, ಮಹಿಳಾ ಸೈನ್ಯವನ್ನು ಸಂಘಟಿಸಿ, ಬಲು ಅಪರೂಪ ಎನ್ನಬಹುದಾದ ಮತ್ತು ಅಸಾಧ್ಯ ಎನ್ನುವಂತ ಸಾಹಸವನ್ನು ಬೇರೆ ಯಾರೂ ಮಾಡಿರಲಿಲ್ಲ. ಸಕಲ ಕ್ಷತ್ರಿಯ ವಿದ್ಯೆಯನ್ನು ಕಲಿತು, ಖಡ್ಗ ಹಿಡಿದು, ಕುದುರೆ ಸವಾರಿ ಮಾಡುತ್ತಾ ರಣಾಂಗಣದಲ್ಲಿ ಶತ್ರುಗಳ ರುಂಡಗಳನ್ನು ಚೆಂಡಾಡುತ್ತಿದ್ದಳು ರಣಚಂಡಿಯಂತೆ! ಈ ವೀರರಾಣಿಗೆ ಸಮಸ್ಯೆ ಎದುರಾಗಿದ್ದು ಮರಾಠರ ಸೈನ್ಯದಿಂದ. ಆ ಸಮಸ್ಯೆ ಏನು? ಶಿವಾಜಿ ಮಹಾರಾಜರ೦ತ ಪ್ರಚ೦ಡ ಪರಾಕ್ರಮಿ ಯುದ್ಧಭೂಮಿಯಲ್ಲಿ ಮುಖಾ-ಮುಖಿಯಾದಾಗ ಏನಾಯಿತು? ಸೋತವರು ಯಾರು? ಕರುನಾಡ ಸಿಡಿಲು ಮಲ್ಲಮ್ಮನೇ? ಅಥವಾ ವೀರಕ್ಷತ್ರಿಯ ಶಿವಾಜಿ ಮಹಾರಾಜರೇ? ಈ ಕುತೂಹಲಕಾರಿ ಸನ್ನಿವೇಶಗಳಿಗೆ ಉತ್ತರ ಈ ಕೃತಿಯಲ್ಲಿದೆ..
-ಕೌಂಡಿನ್ಯ
ಕೌಂಡಿನ್ಯ| Kauṇḍinya |
0 average based on 0 reviews.