ಇದೊಂದು ಅತ್ಯಪೂರ್ವ ಅವಕಾಶ: “ಬಾ ಇಲ್ಲಿ ಸಂಭವಿಸು, ಇಂಥ ವಿಶಿಷ್ಟ ಕಥಾಸ್ಪರ್ಧೆ ನಮ್ಮ ದೇಶ-ಭಾಷೆ-ಕಾಲದಲ್ಲಿ ಈಗ ಘಟಿಸುತ್ತಿರುವ ಅಪೂರ್ವ !!
ನೀವು ಮಾಡಬೇಕಿರುವುದು ಇಷ್ಟೇ:
ಕನ್ನಡದ ಓದುಗರ ಸಂವೇದನೆ, ಸೂಕ್ಷ್ಮತೆಗಳನ್ನು ಮುಟ್ಟಿತಟ್ಟಿ, ಜಾಗರೂಕಗೊಳಿಸಬಲ್ಲ ಹೊಚ್ಚ ಹೊಸ ಕಥೆಯನ್ನು ಬರೆಯುವುದು. ಹೊಸ ಕಥನಗಳ ದಾರಿಗೆ ಬೇಕಾದ ಹೊಸ ಕಸುವು, ತಾರುಣ್ಯದ ಹುಮ್ಮಸ್ಸನ್ನು ತುಂಬುವುದು.ಕನ್ನಡ ಕಥಾಲೋಕಕ್ಕೆ ಇದು ‘ನುಡಿಯ ಭಾಗ್ಯ’ ಎನ್ನುವಂಥ ಮಹತ್ವಾಕಾಂಕ್ಷೆಯ ಕಥೆಯನ್ನು ಕಟ್ಟುವುದು.