ನಾಳೆಗಿದು ಇರದಿದ್ದರೆ ಹೇಗೆ ಎಂಬ ಆತಂಕಕ್ಕೂ, ಇದು ನಾಳೆಗೂ ಇರಬೇಕು ಎಂಬ ಆಶಯಕ್ಕೂ ಯಾವುದೇ ಅರ್ಥವಿಲ್ಲ. ಹಿಂದೆ ಎಷ್ಟೆಲ್ಲಾ ಆಗಿಹೋಗಿದೆ, ಕೂಡಿದೆ, ಕಳೆದಿದೆ, ನಾಶವಾಗಿದೆ, ಹುಟ್ಟಿದೆ. ಮುಂದೆಯೂ ಏನೆಲ್ಲಾ ಆಗಲಿಕ್ಕಿರಬಹುದು. ಅಖಂಡ ಕಾಲದ ಯಾವುದೋ ಬಿಂದುವಿನಲ್ಲಿ ನಿಂತಿದ್ದೇವೆ ನಾವು. ಆ ಬಿಂದು ಸಂಪೂರ್ಣ ಮುಗಿತಾಯಕ್ಕೆ ಎಷ್ಟು ಅಂತರದಲ್ಲಿದೆಯೋ ನಮಗೆ ಹೇಗೆ ಗೊತ್ತಾಗಬೇಕು ? ಇದು ಒಳ್ಳೆಯ ಕಾಲ ಅಂತ ನಿರ್ಧರಿಸುವ ಮಾನದಂಡ ಯಾವುದು ? ನಾವು ಬದುಕಿದ್ದವೆಂಬ ಕಾರಣಕ್ಕೆ ಅದು ಒಳ್ಳೆಯ ಕಾಲವೇ ? ಆಗಿರಬಹುದು, ಆಗಿಲ್ಲದಿರಬಹುದು. ಕಾಲಕ್ಕೆ ಒಳಿತು ಕೆಡುಕುಗಳೆಂಬುದಿದೆಯೇ ? ನಮ್ಮ ನೋಟ ಸಂಕುಚಿತ. ಕಾಲದ್ದು ಸಮಗ್ರ ನೋಟ. ನಮ್ಮ ಕಾಲಕ್ಕೆ ಬಹುದೊಡ್ಡ ಸಂಗತಿಯಾದದ್ದು ಕಾಲದ ಪಾಲಿಗೆ ಯಕಶ್ಚಿತ್ ಆಗಿರಬಹುದು. ನಮಗೆ ಪತ್ರಗಳ ಕಾಲದ ಕಾಯುವಿಕೆಯ ಭಾವುಕತೆಯೂ ಬೇಕು. ವಾಟ್ಸಪ್ ಗ್ರೂಪೂ ಬೇಕು. ಆದರೆ ಅವೆರಡೂ ಏಕಕಾಲದಲ್ಲಿ ಒಟ್ಟಿಗೇ ಇರಲಾರವು. ಛೇ ಪತ್ರವೆಷ್ಟು ಚೆಂದವಿತ್ತು ಎಂಬ ನೆನಪಿನೊಂದಿಗೇ ಅದನ್ನು ಗೌರವಯುತವಾಗಿ ಬೀಳ್ಕೊಟ್ಟು ಹೊಸ ರೂಪಾಂತರವನ್ನು ಸ್ವಾಗತಿಸಬೇಕು. ಅದು ಅನಿವಾರ್ಯ ಕೂಡ. ಆದರೂ ನಮಗೆ ಹಿಂದೆ ಚೆಂದವಿತ್ತು ಅನಿಸಬೇಕು. ಬದಲಿನ ನಿಯಮ, ಅನಿವಾರ್ಯತೆ ಎಲ್ಲದರ ಅರಿವಿದ್ದೂ ಹಿಂದೆ ಹೀಗಿತ್ತಲ್ಲಾ... ಎಂಬ ನೆನಪು ಮತ್ತು ಕಳೆದುಹೋಗುವಾಗಿನ ಕಳವಳ ಕಾಡಬೇಕು ಕಿಂಚಿತ್ತಾದರೂ. ಹಾಗೆ ಕಾಡಿದರೇನೇ ನಾವು ಮನುಷ್ಯರು!
Nil
nil
ಸೋಲನ್ನು ಸೋಲಿಸಿ ಗೆಲ್ಲುವವರಿಗಾಗಿ... ಕನ್ನಡದ ಖ್ಯಾತ ಅಂಕಣಕಾರರು ಹಾಗು ಖ್ಯಾತ ವಾಗ್ಮಿಗಳು ಆಗಿರುವ ರಾಜೇಂದ್ರ ಭಟ್ ಕೆ ಅವರು ಬರೆದಿರುವ ಸ್ಫೂರ್ತಿದಾಯಕ ಅಂಕಣ ಬರಹಗಳಲ್ಲಿ ಆಯ್ದ ಕೆಲವು ಲೇಖನಗಳು ಈ ಪುಸ್ತಕದಲ್ಲಿವೆ. ಅವರ ಲೇಖನಗಳಲ್ಲಿ ಹೆಚ್ಚು ಸ್ಫೂರ್ತಿ ಮತ್ತು ಪ್ರೇರಣೆಗಳು ಇರುತ್ತವೆ ಎಂದು ಓದುಗರು ಈಗಾಗಲೇ ತುಂಬು ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಐದು ವರ್ಷಗಳಿಂದ ಒಂದು ದಿನವೂ ಬಿಡದೆ ಇಂತಹ ಅಂಕಣಗಳನ್ನು ಬರೆಯುವುದು ಸವಾಲಿನ ಕೆಲಸ. ಏಕತಾನತೆ ಬಾರದ ಹಾಗೆ ನೋಡಿಕೊಳ್ಳುವುದು. ಪ್ರತೀ ನಿತ್ಯವೂ ಹೊಸ ವೈವಿಧ್ಯಗಳಿಗೆ ತೆರೆದುಕೊಳ್ಳುವುದು ಸುಲಭವಲ್ಲ. ಅವರಿಗೆ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಗಣಿತ, ಸಂಗೀತ, ಕಲೆ, ಕ್ರಿಕೆಟ್, ಕ್ರೀಡೆ, ಸಿನೆಮಾ, ಆಧ್ಯಾತ್ಮ, ಸಂಶೋಧನೆ, ವಿಜ್ಞಾನ, ತಂತ್ರಜ್ಞಾನ ಎಲ್ಲ ವಿಭಾಗಗಳಲ್ಲಿಯೂ ಆಸಕ್ತಿ ಮತ್ತು ಅಧ್ಯಯನಗಳು ಇರುವ ಕಾರಣ ಈ ಸರಣಿ ಬರವಣಿಗೆಯು ಅವರಿಗೆ ಸಾಧ್ಯವಾಗಿದೆ. ಅವರು ಲೇಖನದಲ್ಲಿ ಇರುವ ಭಾವನಾತ್ಮಕ ಮತ್ತು ಸೃಜನಾತ್ಮಕ ಸಾಲುಗಳು ನಿಮ್ಮನ್ನು ಪುಸ್ತಕ ಕೆಳಗಿಡಲು ಬಿಡದೆ ಸರಾಗವಾಗಿ ಓದಿಸಿಕೊಂಡು ಹೋಗುವುದು. ಬಹು ಬೇಡಿಕೆಯ ಭಾಷಣಕಾರರು ಮತ್ತು ವಿಕಸನ ತರಬೇತುದಾರರೂ ಆಗಿರುವ ರಾಜೇಂದ್ರ ಭಟ್ಟರ ದಶಕಗಳ ಓದು ಮತ್ತು ಅನುಭವ ಇಲ್ಲಿ ಹೆಪ್ಪುಗಟ್ಟಿ ಗೆಲುವಿನ 'ರಾಜಪಥ'ವನ್ನೇ ನಿರ್ಮಿಸಿದೆ. ಲೆಜೆಂಡ್ ವ್ಯಕ್ತಿಗಳ ಬದುಕಿನಲ್ಲಿ ನಡೆದ ಸ್ಫೂರ್ತಿದಾಯಕವಾದ ಅಂಶಗಳು, ಅವರ ಬದುಕಲ್ಲಿ ಮೂಡಿದ್ದ ಮಹತ್ವದ ತಿರುವುಗಳು, ಗೆಲುವಿಗೆ ಕಾರಣವಾದ ಅಂಶಗಳು, ಬದುಕಿನಲ್ಲಿ ಸೋಲುಗಳನ್ನು ಅವರು ಗೆದ್ದ ರೀತಿ, ಅವರಿಗೆ ದೊರೆತ ಉಡ್ಡಯನ ವೇದಿಕೆಗಳು, ಸಾಧಕರ ಬದ್ದತೆ... ಇವೆಲ್ಲವೂ ನಮಗೆ ಲೇಖಕರ ಸುಂದರ ಬರವಣಿಗೆಯ ಮೂಲಕ ಕಣ್ಣಿಗೆ ಕಟ್ಟುತ್ತವೆ. ಆಡಂಬರ ಉಪಮೆಗಳ ಗೊಡವೆಯಿಲ್ಲದೆ ಸುಲಭವಾಗಿ ಓದಿಸಿಕೊಂಡು ಹೋಗುವ ಶಕ್ತಿಯು ಈ ಲೇಖನಗಳಿಗಿವೆ. ರಾಜಪಥವು ರಾಜೇಂದ್ರ ಭಟ್ಟರ ಟ್ರೆಂಡ್ ಸೆಟ್ಟಿಂಗ್ ಅಂಕಣ ಲೇಖನಗಳಿಂದ ಸಿಂಗಾರವಾಗಿದೆ. ಎಡೆಬಿಡದೆ ಪ್ರತಿನಿತ್ಯವೂ ಅಂಕಣ ಬರಹಗಳ, ಸ್ಫೂರ್ತಿ ಮಾತುಗಳ ಮೂಲಕ ಗೆಲುವಿನ ರಹದಾರಿಯನ್ನೇ ನಿರ್ಮಿಸಿಕೊಡುವ ಶ್ರೀಯುತರ ಸಾಹಿತ್ಯ ಸೇವೆ ಹೀಗೆ ನಿರಂತರವಾಗಿ ಸಾಗಲಿ....
ಅಸಾಮಾನ್ಯರು ಎನ್ನಿಸಿಕೊಳ್ಳುವುದಕ್ಕೆ ಮುಂಚೆ ಎಲ್ಲರೂ ಸಾಮಾನ್ಯರೆ! ಹೌದಲ್ವಾ? ನೀವೇ ಯೋಚಿಸಿ ನೋಡಿ, ಅವರಿಗೂ ಅಡೆತಡೆಗಳು ಎಲ್ಲರಿಗೂ ಬಂದಂತೆ ಬಂದಿರುತ್ತವೆ. ಅವರು ಅಡೆತಡೆಗಳ ಬಗ್ಗೆ ಗೊಣಗುತ್ತ ಕೂರುವ ಬದಲು ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದಿರುತ್ತಾರೆ. ಈ ಧೀಮಂತ ಗುಣವೇ ಅವರನ್ನು ಗುಂಪಿನಿಂದ ಬೇರ್ಪಡಿಸುತ್ತದೆ. ವಿಶೇಷರನ್ನಾಗಿಸುತ್ತದೆ. ಲಕ್ಷಾಧಿಪತಿಯ ಗುಣಲಕ್ಷಣಗಳನ್ನು ನಾವು ಅಳವಡಿಸಿಕೊಳ್ಳಬಹುದೇ? ಅಥವಾ ಅವು ಅನುವಂಶಿಕವಾಗಿ ಬರುವಂತಹ ಗುಣಗಳೆ? ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಕೆಲವೊಂದು ಹುಟ್ಟಿನಿಂದ ಬಂದಿರುತ್ತದೆ ಎನ್ನುವುದು ನಿಜವಾದರೂ, ಬಹುತೇಕ ಗುಣಗಳನ್ನು ಕಲಿಕೆಯಿಂದ, ಸ್ವ-ಪ್ರಯತ್ನದಿಂದ ಅಳವಡಿಸಿಕೊಳ್ಳಬಹುದು. ಜಗತ್ತಿನ ಮುಕ್ಕಾಲು ಪಾಲು ಶೀಮಂತರು ಸೆಲ್ಫ್ ಮೇಡ್. ಅವರಿಗೂ ಯಾವ ಗಾಡ್ಫಾದರ್ ಇರಲಿಲ್ಲ ಎನ್ನುವುದು ಗೊತ್ತಿರಲಿ. ನಿಮಗೆಲ್ಲಾ ಒಂದು ಅಚ್ಚರಿಯ ವಿಷಯವನ್ನು ಹೇಳುವೆ. ಅಚಾನಕ್ಕಾಗಿ ಅಂದರೆ ಲಾಟರಿ ಮೂಲಕ ಹಣ ಗಳಿಸಿದವರಲ್ಲಿ 70ಕ್ಕೂ ಹೆಚ್ಚು ಪ್ರತಿಶತ ಜನ ಒಂದೆರಡು ವರ್ಷಗಳಲ್ಲಿ ದಿವಾಳಿ ಎದ್ದು ಹೋಗುತ್ತಾರೆ ಎನ್ನುತ್ತದೆ ಸಂಶೋಧನೆ. ಅಮೆರಿಕನ್ ಬಾಂಕ್ರಾಫ್ಟ್ಸಿ ಇನ್ಸ್ಟಿಟ್ಯೂಟ್ ನಡೆಸಿದ ಸಂಶೋಧನೆಯಲ್ಲಿ ಲಾಟರಿ ಗೆದ್ದವರಲ್ಲಿ ಮೆಜಾರಿಟಿ 2ರಿಂದ 5 ವರ್ಷಗಳಲ್ಲಿ ದಿವಾಳಿ ಘೋಷಿಸಿಕೊಳ್ಳುತ್ತಾರೆ ಎನ್ನುವುದು ತಿಳಿದು ಬಂದಿದೆ. ಇದರರ್ಥ ಸುಲಭವಾಗಿ ಬಂದದ್ದು ಸುಲಭವಾಗಿ ಹೋಗುತ್ತದೆ. ನಮಗ್ಯಾವುದೂ ಪುಕ್ಕಟೆ ಬೇಡ. ಸುಲಭವಾಗುವುದೂ ಬೇಡ. ಕ್ಷಮತೆ ಹೆಚ್ಚಿಸಿಕೊಳ್ಳೋಣ, ಇಲ್ಲಿನ ಗುಣಗಳನ್ನು ಅಳವಡಿಸಿಕೊಳ್ಳೋಣ. ಅವು ನಿಜಕ್ಕೂ ನಮ್ಮೊಂದಿಗೆ ಕೊನೆಯವರೆಗೂ ಬರುತ್ತವೆ.
Showing 181 to 210 of 245 results